ಬಸವಣ್ಣ   
  ವಚನ - 1338     
 
ಲಿಂಗವಲ್ಲದನ್ಯವನರಿಯೆ, ಶಿವಲಿಂಗವಲ್ಲದನ್ಯವ ನೆನೆಯೆ, ಜಂಗಮವಲ್ಲದನ್ಯಕ್ಕೆರಗೆ, ಪ್ರಸಾದವಲ್ಲದನ್ಯವ ಕೊಳ್ಳೆ, ಶಿವಗಣಂಗಳಲ್ಲದನ್ಯರ ಬೆರೆಯೆ. ಕೂಡಲಸಂಗಮದೇವರು ಸಾಕ್ಷಿಯಾಗಿ ನಾನಾವ ತೀರ್ಥಯಾತ್ರೆಗಳನರಿಯೆ.