ಬಸವಣ್ಣ   
  ವಚನ - 25     
 
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ; ಚಂದ್ರ ಕುಂದೆ ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೆ ? ಅಂಬುಧಿಯ ಮುನಿಯಾಪೋಷಣವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ? ಆರಿಗಾರೂ ಇಲ್ಲ; ಕೆಟ್ಟವಂಗೆ ಕೆಳೆಯಿಲ್ಲಾ! ಜಗದ ನಂಟ ನೀನೇ, ಅಯ್ಯಾ, ಕೂಡಲ ಸಂಗಮದೇವಾ.
Hindi Translation चंद्रोदय से अंबुधि में ज्वार आता है; चंद्र के क्षीण होने से घाटा, चंद्र पथ में राहु के आडे आने पर अंबुधि ने कोलाहल मचाया? अंबुधि को मुनि के स्वाह करने पर चंद्र ने विरोध किया, स्वामी? कोई किसी का नहीं, पतितों का साथी नहीं जगद्बंधु तुम ही हो, कूडलसंगमदेव ॥ Translated by: Banakara K Gowdappa