ಬಸವಣ್ಣ   
  ವಚನ - 131     
 
ಆರತವಡಗದು; ಕ್ರೋಧ ತೊಲಗದು; ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ ನೀನೆತ್ತಲು ಶಿವನೆತ್ತಲು? ಹೋಗಯ್ಯಾ, ಮರುಳೇ! ಭವರೋಗವೆಂಬ ತಿಮಿರ ತಿಳಿಯದನ್ನಕ್ಕ ಕೂಡಲಸಂಗಯ್ಯನೆತ್ತ, ನೀನೆತ್ತ? ಮರುಳೇ!
Hindi Translation आशा नहीं मिटती, क्रोध नहीं हटता, क्रूरता, कुभाषा, कपट न छूटने तक तू कहाँ? शिव कहाँ? ह्ट जा पगले भवरोग-तिमिर न फटने तक कूडलसंगमदेव कहाँ? तू कहाँ? पगले ॥ Translated by: Banakara K Gowdappa