ಬಸವಣ್ಣ   
  ವಚನ - 136     
 
ದೂಷಕನವನೊಬ್ಬ ದೇಶವ ಕೊಟ್ಟರೆ, ಆಸೆಮಾಡಿಯವನ ಹೊರೆಯಲಿರಬೇಡ. ಮಾದರ ಶಿವಭಕ್ತನಾದರೆ, ಆತನ ಹೊರೆಯಲ್ಲಿ ಭೃತ್ಯನಾಗಿರ್ಪುದು ಕರಲೇಸಯ್ಯಾ. ತೊತ್ತಾಗಿರ್ಪುದು ಕರಲೇಸಯ್ಯಾ. ಕಾಡ ಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
Hindi Translation कोई दूषक देश दे, तो लोभ से उसके पास मत रहो; श्वपच शिवभक्त हो तो, उसका अच्छा भृत्य बनना अच्छा है; दास बनना अच्छा है। जंगली भाजी तवे पर भूनकर भी मम कूडल संग के शरणों के साथ रहो॥ Translated by: Banakara K Gowdappa