ಬಸವಣ್ಣ   
  ವಚನ - 169     
 
ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು. ಹರಿದು ಹೆದ್ದೊರೆಯೆ, ಕೆರೆ ತುಂಬಿದಂತಯ್ಯಾ! ನೆರೆಯದ ವಸ್ತು ನೆರೆವುದು ನೋಡಯ್ಯಾ. ಅರಸು ಪರಿವಾರ ಕೈವಾರ ನೋಡಯ್ಯಾ! ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ ಕಲ್ಲು ಕೊಂಡಂತೆ, ಕೂಡಲಸಂಗಮದೇವಾ.
Hindi Translation शिव के देते समय संपदा पीछे आती है जैसे एक बृहत प्रवाह तालाब को भरता है देखा, अप्राप्य वस्तु प्राप्त होती है; राजा और परिवार वश में रहते हैं; परम निरंजन को भूलना भरे मटके पर पत्थर फेंकने की भाँति है कूडलसंगमदेव ॥ Translated by: Banakara K Gowdappa