ಬಸವಣ್ಣ   
  ವಚನ - 176     
 
ಆಳಿಗೊಂಡಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ? ಆರಾದೊಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ. ಏನೂ ಅರಿಯೆನೆಂದು ಮೌನಗೊಂಡಿರಬೇಡ: ಕೂಡಲಸಂಗಮದೇವರ ಮುಂದೆ 'ದಂದಣ, ದತ್ತಣ' ಎನ್ನಿ.
Hindi Translation उपहास करेंगे यह इसका भय क्यों? नास्तिक कहेंगे, यह लाज क्यों? कोई भी हो, महादेव की शरण में जाओ अनजान समझ मौन मत रहो कूडलसंगमदेव समक्ष तुतलाते रहो ॥ Translated by: Banakara K Gowdappa