ಬಸವಣ್ಣ   
  ವಚನ - 177     
 
ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ ತಪ್ಪುವುವು ಅಪಮೃತ್ಯು, ಕಾಲಕರ್ಮಂಗಳಯ್ಯಾ! ದೇವಪೂಜೆಯ ಮಾಟ, ದುರಿತಬಂಧನದೋಟ! ಶಂಭು ನಿಮ್ಮಯ ನೋಟ, ಹೆರೆಹಿಂಗದ ಕಣ್‌ಬೇಟ! ಸದಾ ಸನ್ನಿಹಿತನಾಗಿ ಶರಣೆಂಬುವುದು, ನಂಬುವುದು. ಜಂಗಮಾರ್ಚನೆಯ ಮಾಟ, ಕೂಡಲಸಂಗನ ಕೂಟ!
Hindi Translation सुप्रभात में श्रद्धा से लिंगदेव का स्मरण करो अकालमृत्यु और कालकर्म टल जायेंगे- । देव – पूजा से दुरित बंधन भागेंगे। शंभो, तव दर्शन नेत्रों की अतृप्त आशा है सदा सन्निहित रहो, शरण में जाओ, विश्वास रखो जंगमार्चन कूडलसंगमदेव से मिलना है ॥ Translated by: Banakara K Gowdappa