ಬಸವಣ್ಣ   
  ವಚನ - 197     
 
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ: ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ; ಜಂಗಮವಾಪ್ಯಾಯನವಾದರೆ ಲಿಂಗ ಸಂತುಷ್ಟಿಯಹುದಯ್ಯಾ: 'ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ ಮಮತೃಪ್ತಿರ್ಮಹಾದೇವಿ ಉಭಯೋರ್ಲಿಂಗ ಜಂಗಮಾತ್'! ಇದು ಕಾರಣ ಕೂಡಲಸಂಗಮದೇವರಲ್ಲಿ ಜಂಗಮವಾಪ್ಯಾಯನವಾದರೆ ಲಿಂಗಸಂತುಷ್ಟಿ.
Hindi Translation अनलाधार से लोहा पानी पीता है धराधार से वृक्ष पानी पीता है, जंगम तुष्टि से लिंग तुष्टि होती है वृक्षस्य वदनं भूमिः स्थावरस्य च जंगमम् अहं तुष्टोस्म्युमादेवी उभयोलिंग जंगमात् अतः जंगम संतुष्ट हो तो लिंग-संतुष्ट होता है ॥ Translated by: Banakara K Gowdappa