ಬಸವಣ್ಣ   
  ವಚನ - 202     
 
ತನು-ಮನ-ಧನವ ಹಿಂದಿಕ್ಕಿಕೊಂಡು, ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು ನೀವೆಲ್ಲಾ ಕೇಳಿರೆ: ತಲಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ ಗುರಿಯ ತಾಗಬಲ್ಲುದೆ? ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ ಕೂಡಲಸಂಗಮದೇವನೆಂತೊಲಿವನಯ್ಯಾ?
Hindi Translation तन, मन धन पीछे रखकर सारहीन बातों का ढेर लगानेवालो, तुम सब सुनो बेसिरे का बाण बेकार नहीं जायेगा, तो लक्ष्य को बेधेगा? जब तक माया पाश दूर न हो और मन की गाँठ न खुले, कूडलसंगमदेव कैसे पसन्न होंगे ? Translated by: Banakara K Gowdappa