ಬಸವಣ್ಣ   
  ವಚನ - 205     
 
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ, ಹಲವು ಪರಿಯಲಿ ವಿಭೂತಿಯ ಹೂಸಿ, ಗಣಾಡಂಬರದ ನಡುವೆ ನಲಿನಲಿದಾಡಿ, ಉಂಡು, ತಾಂಬೂಲಗೊಂಡು ಹೋಹುದಲ್ಲಾ! ತನು-ಮನ-ಧನವ ಸಮರ್ಪಿಸದವರ ಕೂಡಲಸಂಗಮದೇವರೆಂತೊಲಿವನಯ್ಯಾ?
Hindi Translation कई मणियाँ बाँध नृत्य करना विविध रीति से विभूति लगाना गणसमूह मध्य आमोद प्रमोद करना- भोजन कर तांबूल चबाते जाना नहीं है तन – मन –धन समर्पित नहीं करनेवालों पर कूडलसंगमदेव कैसे प्रसन्न होंगे ? Translated by: Banakara K Gowdappa