ಬಸವಣ್ಣ   
  ವಚನ - 225     
 
ಹತ್ತು ಮತ್ತರದ ಭೂಮಿ, ಬತ್ತುವ ಹಯನು, ನಂದಾದೀವಿಗೆಯ ನಡೆಸಿಹೆವೆಂಬವರ ಮುಖವ ನೋಡಲಾಗದು; ಅವರ ನುಡಿಯ ಕೇಳಲಾಗದು. ಅಂಡಜ, ಸ್ವೇದಜ, ಉದ್ಬಿಜ, ಜರಾಯುಜರೆಂಬ ಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ? ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ "ಎನ್ನಿಂದಲೆ ಆಯಿತ್ತು, ಎನ್ನಿಂದಲೆ ಹೋಯಿತ್ತು" ಎಂಬವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ ಕೂಡಲಸಂಗಮದೇವ?
Hindi Translation ‘दस बीघा भूमि, दुधारु गाय और नित्या ज्योति का वचन निभाऊँगा यों कहनेवालों का मुख देखना नहीं चाहिए; उन का वचन सुनना नहीं चाहिए । अंडज, स्वेदज, उद्भिज, जरायुज प्राणियों को भवितव्य-किसने दिया? मालिक को लड्डू तोडकर देने की भाँति मुझसे ही हुआ, ‘मुझसे ही गया’ कहनेवाले को कुचलकर मुँह में धूल झोंकना छोड देंगे, कूडलसंगमदेव? Translated by: Banakara K Gowdappa