ಬಸವಣ್ಣ   
  ವಚನ - 246     
 
ಭಕ್ತ ಭಕ್ತನ ಮನೆಗೆ ಬಂದರೆ, ಭೃತ್ಯಾಚಾರವ ಮಾಡಬೇಕು: ಕರ್ತನಾಗಿ ಕಾಲ ತೊಳೆಯಿಸಿಕೊಂಡರೆ, ಹಿಂದೆ ಮಾಡಿದ ಭಕ್ತಿಗೆ ಹಾನಿ! ಲಕ್ಷಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ; ಅಲ್ಲಿ ಕೂಡಿ ದಾಸೋಹವ ಮಾಡಿದರೆ ಕೂಡಿಕೊಂಬನು ನಮ್ಮ ಕೂಡಲಸಂಗಮದೇವನು.
Hindi Translation भक्त, भक्त द्वार आने पर भृत्याचार करना चाहिए। कर्ता बनकर पैर धुलवाने से पूर्व-कृत भक्ति नष्ट होगी! लाख कोस चलकर भक्त का भक्त को देखना सदाचार है । वहाँ मिलकर ‘दासोह’ करें तो मम कूडलसंगमदेव अपना लेंगे॥ Translated by: Banakara K Gowdappa