ವಚನ - 1465     
 
ರಂಜಕರೆಲ್ಲರು ರತ್ನವ ಕೆಡಿಸಿ ಅಂಧಕಾರದಲ್ಲಿ ಬಂದರಸುವರು. ಅದರಂದ ತಿಳಿಯದು ಛಂದ ತಿಳಿಯದು. ಬಂದ ಬಟ್ಟೆಯಲಿ ತೊಳಲುವರು. ಸಂದೆಗವಿಡಿದು ಸಂದವರೆಲ್ಲ ಅಂದಂದಿಗೆ ದೂರ ಗುಹೇಶ್ವರಾ.