ವಚನ - 1531     
 
ಷಡುದರುಶನ ಜ್ಞಾನವಲ್ಲದೆ ಮತ್ತೆ ಇಲ್ಲೆಂಬ ಜ್ಞಾನಿಗಳೆಲ್ಲರೂ ಚಾಂಡಾಲಿಗಳು, ಬ್ರಹ್ಮಚಾರಿಗಳೆಲ್ಲರೂ ಉದ್ದೇಶಿಗಳು, ಶಿವಯೋಗಿಗಳೆಲ್ಲರು ಅಂಧಕರು, ಇಷ್ಟಲಿಂಗಸಂಬಂಧಿಕರೆಲ್ಲರೂ ಅವಿಚಾರಿಗಳು. ಅವರಿವರ ಪರಿಯಲ್ಲ ಗುಹೇಶ್ವರಾ, ನಿಮ್ಮ ಶರಣರ ಪರಿ ಬೇರೆ!