ವಚನ - 1557     
 
ಸಾವ ಜೀವಕ್ಕೆ ಗುರು ಬೇಡ, ಸಾಯದ ಜೀವಕ್ಕೆ ಗುರು ಬೇಡ. ಗುರುವಿಲ್ಲದೆ ಕೂಡಲು ಬಾರದು. ಇನ್ನಾವ ಠಾವಿಂಗೆ ಗುರು ಬೇಕು ಹೇಳಿರೆ? ಸಾವು ಜೀವ ಸಂಬಂಧದ ಠಾವ ತೋರಬಲ್ಲಡೆ ಆತನೆ ಗುರು ಗುಹೇಶ್ವರಾ.