ವಚನ - 842     
 
ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು ವಿರೋಧಿಗಳಾದವರು. ಕಾಮಾರಿಯೆಂಬರು ಕಣ್‌ಕಾಣದವರು. ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು. ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ!