ವಚನ - 59     
 
ಅಯ್ಯ ಬಂದಾನು ಆನಂದ ಮಂಟಪಕ್ಕೆ, ಎಚ್ಚತ್ತಿರಿರೋ ದ್ವಾರಕಿಂಕರರು; ಎಚ್ಚತ್ತಿರಿರೋ ಅವಸರಿಗರು. ಅಯ್ಯ ಸುತ್ತಿಮುತ್ತಿಗೆಗೊಳಗಾದನಾದಡೆ ಪಟ್ಟಣ ಸರ್ವಸ್ವವೂ ವಶವಹುದು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಹಿಡಿಗಟ್ಟಿಗೊಳಗಹನು.