ವಚನ - 147     
 
ಆದ್ಯಕ್ಷರದ್ವಯವು ಅಜಲೋಕದ ಹೆಸರಿಡಲಿಕಳವಲ್ಲ, ಹೆಸರುಗೆಟ್ಟಾ ಸೀಮೆ ಪಸರಿಸುತಿಕ್ಕು. ಮತ್ತಾನಂದದ ಹೆಸರಿಡುವ ಸೀಮೆಯನು ಗುರುವಾಗಿ ಪಸರಿಸಲು, ವಸುಧೆ ಕಂಡಿತು ಒಂದು ಲಿಂಗರೂಪ. ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನಾ ಸೀಮೆಯೊಳಗಡಗಿಪ್ಪನಂತ ಬ್ರಹ್ಮಾಂಡವು.