ವಚನ - 181     
 
ಆನೆಂಬ ಕುಸುಮಕ್ಕೆ ತಾನೆಂಬ ಮಧುಕರನು ಭಾನುವಿನ ಉದಯದಲ್ಲಿ ವಿಕಸವಾಗಿ ಸೋಮವೀಥಿಯ ಬೆಳಗಿ ಹೇಮಶೈಲದ ಉದಯ ಕಾಮದಂಡಿಯ ಹಿಡಿದು ಮನೆಮನೆಗಳ ಸೀಮೆಯನು ಸಂಬಂಧ ಗ್ರಾಮವನು ಮನೆಗಳನು ಆನಳಿದು ಕಂಡೆನೈ ಹವಣು ಹಲವ. ನಿಸ್ಸೀಮನಾ ಕಪಿಲಸಿದ್ಧ ಮಲ್ಲಿಕಾರ್ಜುನನ ಸೀಮೆಯನು ಕಾಬವರು ಹಲಬರಿಲ್ಲ.