ವಚನ - 187     
 
ಆಪ್ಯಾಯನವರತು ಪರಿಣಾಮ ನೆಲೆಗೊಂಡು ಅರಿವರತು ಮರಹು ನಷ್ಟವಾದವರ ಕುರುಹುಗೆಟ್ಟು ಪದವ ಮೀರಿ ಸೀಮೆಯ ದಾಂಟಿದವರ ತಂದು ತೋರಾ, ಅಯ್ಯ ನಿಮ್ಮ ಧರ್ಮ. ಎನ್ನ ಭವದ ಬೇರ ಹರಿವೊಡೆ ತಂದು ತೋರಾ, ಇವರ ತಂದು ತೋರು. ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ ಹತ್ತೆ ಸಾರಿಸಾ ಬಸವಣ್ಣಾ.