ವಚನ - 191     
 
ಆಯಿತ್ತಾಯಿತ್ತು ಗುರುಸ್ವಾಯತ; ಆಯಿತ್ತಾಯಿತ್ತು ಲಿಂಗ ನಿಜನಿಷ್ಠೆ; ಆಯಿತ್ತಾಯಿತ್ತು ಜಂಗಮದರಿವು ಸಂಭಾಷಣೆ; ಆಯಿತ್ತಾಯಿತ್ತು ಪ್ರಸಾದದ ರುಚಿಭೋಗ; ಆಯಿತ್ತಾಯಿತ್ತು ಸಯವಾದ ಭಕ್ತಿ ಜ್ಞಾನ ವೈರಾಗ್ಯದ ನಿರಿಗೆ. ಆಯಿತ್ತಾಯಿತ್ತು ಸರ್ವಾಚಾರ ಸಂಪತ್ತಿನ ಸೌಖ್ಯವೆನಗೆ ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ ನೀವು ಗುರುಮೂರ್ತಿಯಾದ ಕಾರಣ