ವಚನ - 194     
 
ಆರು ಕಂಡು ಕೈಯೆತ್ತಿ ಮುಗಿದರೆ ನಾನು ಮುಗಿವೆನಾಗಿ, ಅದೇನು ಕಾರಣವೆಂದರೆ ಅವರ ನಿಟಿಲತಟದ ಭ್ರೂಮಧ್ಯದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪನಾಗಿ ಅವರರಿಯರು ನಾ ಬಲ್ಲೆನಾಗಿ ಕೈಮುಗಿವೆನು.