ವಚನ - 256     
 
ಇಷ್ಟಲಿಂಗವ ಕರಕ್ಕೆ, ಪ್ರಸಾದಲಿಂಗವ ತನುವಿಂಗೆ ಒಳ ಹೊರಗೆನ್ನದೆ ಸರ್ವಾಂಗದೊಳಗೆ ಚರ ಪ್ರಸಾದಲಿಂಗವನಿತ್ತ ಶ್ರೀಗುರು ಆನಂದಸ್ಥಾನದಲ್ಲಿ ಅಕ್ಷರಲಿಂಗವನು ತಂದಿತ್ತ ಕಾರಣ ನಿನ್ನಂತೆ ಆನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.