ವಚನ - 266     
 
ಉತ್ತರಕೋಣೆಯ ಉತ್ತರೋತ್ತರ ವಾಕ್ಯವ ಕೇಳಿ ಧನ್ಯನಾದೆನಯ್ಯಾ. ಉತ್ತರಕೋಣೆಯ ನಿಮಿತ್ತ ಪರಮಗುರುವಿನ ದೂಷಣೆಯ ಕೇಳಿ ಪಾಪಿಯಾದೆನಯ್ಯಾ. ಇದುಕಾರಣ, ಶರಣರ ದೂಷಣೆಯಿಂದ ಶರಣರ ಮನಕ್ಕೆ ಭೂಷಣವೆ? ಕಪಿಲಸಿದ್ಧಮಲ್ಲಿಕಾರ್ಜುನಾ.