ವಚನ - 294     
 
ಎನ್ನ ಭವಕ್ಕೆ ತಂದಿರಿಸಿ ನರಕವನೂಡಿಹೆನೆಂದಡೆ ಉಂಡೆನೆ? ನಾನುಣ್ಣೆನುಣ್ಣೆ, ನಿನ್ನ ಕರುಣವುಂಟು! ನಿನ್ನ ಬಸವಣ್ಣನ ಕರುಣದಿಂದ ನೀನಪ್ಪೆ. ನಿನ್ನ ಕಕ್ಕುಲತೆ ಉಳಿದುದು, ಕಪಿಲಸಿದ್ಧಮಲ್ಲಿಕಾರ್ಜುನಾ.