ವಚನ - 300     
 
ಎಪ್ಪತ್ತೆರಡು ಸಾವಿರ ಇಚ್ಛಾನಾಡಿಗಳಲ್ಲಿ ತಪ್ಪದೆ ಚರಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿಯದಂತಿರಲಿ. ದ್ವಾರ ಒಂಬತ್ತರಲ್ಲಿ ನಾಯಕದ್ವಾರವನರಿಯಬೇಕು ಯೋಗಿಗಳು; ಬೇರೆ ಜಪ ನಿಮಗೇಕೆ ಹೇಳಿರೆ. `ಹಂಸ ಹಂಸ' ಎಂಬ ಜಪ ಸಂಪೂರ್ಣವಾಗಿ ಅತ್ತಲಿತ್ತಲಿತ್ತೆರಕ್ಕೆ ಕಂಪಿಸದಿದ್ದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಕೂರ್ತು `ತತ್ವಮಸಿ'ಯೆಂಬ ಭೈತ್ರದಿಂದೊಯ್ವನವ್ವಾ.