ವಚನ - 302     
 
ಎಮ್ಮ ನಲ್ಲನ ಬೆನ್ನಲ್ಲಿ ಹೋಗಿ ಎಂಟು ನಾಡ ಗಡಿಯ ಕಂಡೆ. ಉರಿಗಳ ಪರಿಗಳು ಉದಕದೆರೆಗಳು ಅವು ಧಗಿ ಭುಗಿಲು ಭೋರೆನ್ನುತ್ತೈದಾವೆ, ಎಲೆ ಅವ್ವಾ. ಅಲ್ಲಿಂದತ್ತ ರೂಪಿಲ್ಲ, ಮೇಲೆ ತಾನು ತಾನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು.