ವಚನ - 306     
 
ಎರಡು ಸಾದಾಖ್ಯದಲ್ಲಿ ಒದವಿದ ಬ್ರಹ್ಮವನು ಪದಚ್ಛೇದವ ಮಾಡುತ್ತಿದ್ದಳವ್ವೆ. ಮೂರಾರಲ್ಲಿ ಹುಟ್ಟಿ ಆರಾರನತಿಗಳೆದಳವ್ವೆ. ಮೀರಿದಾನಂದದ ನೆಲೆಮನೆಯಾಗಿದ್ದಳವ್ವೆ. ಕಪಿಲಸಿದ್ಧಮಲ್ಲಿನಾಥನ ಕೂಡಿ ಅವ್ವೆ.