ವಚನ - 326     
 
ಎಲೆ ಬಸವಾ, ಎಲೆ ಚೆನ್ನಬಸವಾ, ಸಟೆ ಏಕೋನಿಷ್ಠೆಯಾಯಿತ್ತಯ್ಯಾ, ದಿಟ ಪುಟ ಮುಕ್ತಿಯಾಯಿತ್ತಯ್ಯಾ, `ಮತಿಕಾಲನಾಶಂ' ನಮೋ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಣ್ಣನಿಂದ ಪ್ರಾಣಲಿಂಗಸಂಬಂಧವಡಗಿತ್ತು.