ವಚನ - 396     
 
ಕನಕದಗಿರಿಗೆ ಕಾಂತಿಯಿಟ್ಟಿತು ಪ್ರಭೆ ವಿನಯದ ಅನುಭಾವಕ್ಕೆ ಚಿನ್ನದ ವರ್ಣವನೇಕೀಕರಿಸಲು ಅನುವಾಯಿತ್ತು ನಾಲ್ಕೆಸಳಪೀಠ ಆ ಪೀಠದಲ್ಲಿ ದಾಸ ನಿಂದು ಆಚಾರವಿಡಿದು ನಡೆಯಲು ಭೂಮಿಯ ಕಳೆದುಕೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.