ವಚನ - 476     
 
ಗಡಣ ಸಂಗಮದಲ್ಲಿ ಮೃಡನನರ್ಚಿಸ ಬಂದೆ ಮೃಡ ಸಿಲುಕುವನುವಲ್ಲ ನಿನ್ನ ಕರದ. ಕರ ಕರದ ಸಂಬಂಧ ಸಿಲುಕುವನ ಸಾಯುಜ್ಯ ಕರದಿಂದ ಮೇಲೆ ತಾ ಮಂಗಳಾಂಗ ಬೆಳಗುವಂ ದೀಪ್ತಿಯಲಿ. ನೆನಹು ಅಕ್ಷರದ್ವಯದ ಅನುಮಿಷದ ಸಿದ್ಧ ಆದ್ಯಂತ ಶೂನ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದ ಭೇದಿಗೆ ಅಲ್ಲದೆ ವೇದ್ಯವಲ್ಲ.