ವಚನ - 484     
 
ಗುರುಪಾದುಕೆಯ ಮೆಟ್ಟಿ ಅಮರಗುಂಡದ ಮಲ್ಲಿಕಾರ್ಜುನಭೃತ್ಯ ಭಂಗಬಟ್ಟು ಗುರುಕರುಣವ ಪಡೆಯಲಿಲ್ಲವೆ? ಗುರುಪಾದುಕೆಯ ಮೆಟ್ಟಿ ಅಮರಶೇಖರನೆಂಬರಸು ಪಾದವ ಕಡಿಸಲಿಲ್ಲವೆ? ಗುರುಪಾದುಕೆಯ ಮೆಟ್ಟಿ ರಾಜೇಂದ್ರಚೋಳ ತನ್ನ ರಾಣಿಯ ಸಂಗ ಬಿಡಲಿಲ್ಲವೆ? ಗುರುಪಾದುಕೆಯ ಮೆಟ್ಟಿ ಸಿಂಹಚೋಳ ಪಂಡಿತರ ಪಾದ ತುಂಡಿಸಲಿಲ್ಲವೆ? ಇದು ಕಾರಣ, ಗುರುಪಾದುಕೆ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆಯ ಚಮ್ಮಾವುಗೆಂದು ನಂಬಿದೆ. ಹುಸಿಯಾದಡೆ, ಪ್ರಮಥಸಂಕುಲದಲ್ಲಿ ಗುರು ಕೊಟ್ಟ ಗುರುಮೂರ್ತಿ ಇಲ್ಲದಂತೆ ಮಾಡಾ ಪ್ರಭುವೆ.

C-412 

  Tue 26 Dec 2023  

 Namaskar
  Vijay kumar
Kistapur taluk sedam district gulbarga