ವಚನ - 536     
 
ಜಲವಿಡಿಯ ಪರಿವಿಡಿಯ ಪದವಿಡಿಯ ಭವವಿಡಿಯ ಒಲವನೊಲ್ಲೆನು ಅವನಕಾಂಕ್ಷೆ ಇಲ್ಲ. ಗುರುಕರುಣದಾಜ್ಞೆಯಲಿ ಪರುಷಲಿಂಗವ ಪಡೆದು ಒಳಹೊರಗೆನ್ನದೆ ಭೇದಿಸುವೆನು ಶ್ರೀಗುರು ಚೆನ್ನಬಸವಣ್ಣ ಸಹರೂಪದ ಭಾವಶುದ್ಧನಪ್ಪೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.