ವಚನ - 580     
 
ತನುಮಧ್ಯದಲಿ ಲಿಂಗತ್ರಯವ ನೆಲೆಗೊಳಿಸಿದ ಶ್ರೀಗುರು. ಪ್ರಸಾದಲಿಂಗತ್ರಯಕ್ಕೆ ಲೋಭವಿಲ್ಲದವರನೇನೆಂಬೆನಯ್ಯಾ? ಲಿಂಗತ್ರಯ ನೆಲೆಗೊಂಡ ಹಾಗೆ ಪ್ರಸಾದ ಲಿಂಗತ್ರಯ ನೆಲೆಗೊಳ್ಳದಿರ್ದಡೆ ಅವರು ಗುರ್ವಾಜ್ಞೆಗೆ ದೂರವೆಂಬೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಎನಗೆ ನಿಮ್ಮ ತೋರಿದ ಬಸವಣ್ಣನಾಣೆ.