ವಚನ - 620     
 
ತ್ರಿಭುವನದಲ್ಲಿ ನಿನ್ನ ಹೊಲಬು ನಿತ್ಯವಾಯಿತ್ತು. ಭಕ್ತಿ ಗಂಭೀರವೆಂಬ ಹೊಳೆ ಹರಿಯಿತ್ತು, ಸುಲಭವೆ ಎಲ್ಲರಿಗೆ ಲೋಕದವರು? ಉಂಬಂತೆ ಉಂಬವರಿಗೆ ಲೋಕದವರು ಬಹಂತೆ ಬಪ್ಪುವರಿಗೆ ಭಕ್ತಿ ಶರಧಿಯಲ್ಲಿ ಬಿದ್ದು ಮಜ್ಜನ ಮಾಡಬಹುದೆ? ಕಪಿಲಸಿದ್ಧಮಲ್ಲಿಕಾರ್ಜುನಾ.