ವಚನ - 657     
 
ಧರೆಯಗಲದ ಜಲವು ಕರಣೇಂದ್ರಿಯಗುಣವು ತರತರದ ತೇಜದ ತೆರೆಯು ಬಂದು ಪರಿಭವದ ತಡಿಗೆ ಹಾಕದ ಮುನ್ನ ಮೃಡನೆ ನೀ ಕೈಗುಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.