ವಚನ - 722     
 
ನುಡಿಹಿಡಿದು ತಾರ್ಕಿಕರಂತೆ ತರ್ಕಿಸುವಾತ ನಾನಲ್ಲ. ಆಡುವ ಮಾತಿಗೆ ಈಡ ಮಾಡುವ ನುಡಿಯಲ್ಲಿ ವಾಕ್ಪಟುತನವು ನಿಜವಲ್ಲ. ನಡೆಯುವ ನಂದಿ ಕುಂಟುವುದುಂಟು, ಹೋಗುವ ಮನುಜ ಎಡಹುವುದುಂಟು, ಮಾತಾಡುವ ಶರಣ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ತಪ್ಪಿದಡೆ ತಪ್ಪಲ್ಲ ಕೇಳಾ ಪ್ರಭುವೆ.