ವಚನ - 743     
 
ಪಟ್ಟಣವೈದು ವಳೆಯ ಹದಿನಾಲ್ಕು ಅಗಳೆ ಕೆಸರು ಘಾತ ಗಾಜರು ಮೂವರು. ಇಪ್ಪತ್ತೈದು ಮಂದಿ ತಳವಾರರು ಸಮಗೂಡದೆ ಹೋರುತ್ತೈದಾರೆ. ಗಾಜರು ಮೂವರು ಒಬ್ಬರಾಗಿ ಕೋಟೆ ಬಿದ್ದು ಕೆಸರರತು ಇಪ್ಪತ್ತೈದು ಮಂದಿ ತಳವಾರರ ಮೂಲ ನಾಶವಂ ಮಾಡಿದರೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಕಟ್ಟುವೆ ಸ್ಥಿರಪಟ್ಟ