ವಚನ - 820     
 
ಬೆಟ್ಟವ ನೆಮ್ಮಿ ಕಟ್ಟಿಗೆಯ ತಳುವದು ಅದಾವಚ್ಚರಿ! ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವುದು ಅದಾವಚ್ಚರಿ! ಪರಕಾಯವ ತೊಟ್ಟಿದ್ದಲ್ಲಿ ಅಚ್ಚರಿ ಅರಿಬಿರಿದೆ. ನಿಮ್ಮುವ ಕಾರುಣ್ಯವಾಗಿದ್ದಲ್ಲಿ ಎನಗೆಲ್ಲಿಯೂ ಸುಖ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದಲ್ಲಿ ಪ್ರಭುದೇವರಿಂದ ಬದುಕಿದೆ.