ವಚನ - 846     
 
ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ ನಿನ್ನ ಜ್ಯೋತಿರ್ಮಯದ ಬೆಳಗ ತೋರಾ. ಆ ಬೆಳಗಿನ ಬಳಗಂಗಳು ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು. ನಿನ್ನಾನಂದಸ್ಥಾನದಲ್ಲಿ ಅತಿಶಯವಪ್ಪ ಬೀಜಾಕ್ಷರದ್ವಯಂಗಳುಂಟು. ಅದರ ಮಹಾಪ್ರಭೆಯಲ್ಲಿ ಒಪ್ಪಿಪ್ಪ ಅವ್ಯಯ ವಾಙ್ಮನಕ್ಕಗೋಚರನಾಗಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೋಡಿಹೆನೆಂಬ ಭರವಸೆ ಘನ, ತೋರಾ ಎಲೆ ಅವ್ವಾ !