ವಚನ - 885     
 
ಮಾಡಿ ಮಾಡಿ ಹೋದವರಿಗೆ ಪದವಿಯಾದಡೆ, ಅದು ನ್ಯಾಯವಾಯಿತು ದೇವರಲ್ಲಿ. ಮಾಡಿ ಮಾಡದೆ ಹೋದವರಿಗೆ ಪದವಿಯಾದಡೆ, ಅದು ನ್ಯಾಯವೆ ದೇವರಲ್ಲಿ. ಮಾಡಿ ಶುದ್ಧನಾದೆನೆಂಬುದು ಮನದ ಭ್ರಮೆ, ಮಾಡದೆ ಶುದ್ಧನಾದೆನೆಂಬುದೂ ಮನದ ಭ್ರಮೆಯದು. ಗಂಗೆಯ ಮುಳುಗಿದವರೆಲ್ಲಾ ಶುದ್ಧ ; ಇದು ಸತ್ಯ, ಇದು ಅಸತ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.