ವಚನ - 932     
 
ಮೇಖಲಾ ಮೂರರೊಳು ಸಾಕಲ್ಯ ಪ್ರಸಾದ ಏಕದಶವೂ ತಾನೊಪ್ಪುತಿಹುದು. ಆಕಾರ ಚತುಷ್ಟಯದ ಮೇಲಿಪ್ಪ ಹತ್ತನೆಯ ನಿರಾಕಾರ ನಿರ್ಮಳದ ನಿತ್ಯ ತಾನು ಕರಣ ನಿರ್ಮಲತೆಯನು ವಿಮಲದಾನಂದವನು ಕರುಣಿಸುತಿಪ್ಪವೈ. ಜನನ ಮರಣ ದೂರವಾಗಿ ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಕರುಣವುಳ್ಳಂಗಲ್ಲದೆ ಇವು ಅರಿಯಲರಿದು.