ವಚನ - 981     
 
ವೀರಧೀರರುಗಳೆಲ್ಲಾ ಕೈಲಾಸಪುರಕ್ಕೆ ದಾಳಿಯ ದಂಡು ಕಾಣಿರೆ. ಸುತ್ತಿ ಮುತ್ತಿ ಪರಬ್ರಹ್ಮವೆಂಬ ಕೋಂಟೆಯ ಕೊಳ್ಳಿರೆ. ಸಮತೆ ಸೈರಣೆ ಸಮಾಧಾನವೆಂಬ ಕೈದುವ ಕೊಳ್ಳಿರೆ. ಅತಿರಥ ಮಹಾರಥರೆಲ್ಲರೂ ಆಯತವಾಗಿರೆ, ನಮ್ಮ ಕಪಿಲಸಿದ್ಧಮಲ್ಲಿನಾಥನೆಂಬ ಶಿವಲಿಂಗವನೊಡಗೂಡಿಕೊಳ್ಳಿರೆ.