ವಚನ - 982     
 
ವೃಕ್ಷಛಾಯೆಯಲ್ಲಿಹಂಗೆ ನೀನು, ಸಕಲರಿಗೆ ಸ್ವಾತಂತ್ರ್ಯ ಪದವನೀವೆ, ನಿನಗಿಲ್ಲ. ನೀನು ನಿಷ್ಕಲದಲ್ಲಿ ನಿರ್ಣೈಸಿ ಸಕಲದಲ್ಲಿ ಸ್ವಾತಂತ್ರಿಸಿ ಇಪ್ಪೆ. ಆನಂದವೆಂಬ ಗತಿಯಲ್ಲಿ, ಸಾನಂದವೆಂಬ ತಾಳವಿಡಿದು ಆಡಲಾಗಿ, ಕೊಟ್ಟೆನೆಂಬ ಪದವ ಅವರೊಲ್ಲದಿದ್ದಡೆ ನೀನೆ ಒಚ್ಚತ ಹೋಹೆ, ಕಪಿಲಸಿದ್ಧಮಲ್ಲಿಕಾರ್ಜುನಾ ನಿನಗಿದು ಸಹಜ.