ವಚನ - 1014     
 
ಶುದ್ಧಾತನನು ಮಾಡಿ ಪರಿಭವವ ತಪ್ಪಿಸಿದ ಹೊದ್ದಲೀಯ್ಯದೆನ್ನತ್ತ ಸುಖದುಃಖವ ಸದ್ಯೋನ್ಮುಕ್ತಿಯನ್ನಿತ್ತು ನಿನ್ನ ಪದದೋರಿಸಿದ ಅತ್ಯಧಿಕ ನಿರ್ಮಳ ಶ್ರೀಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.