ವಚನ - 1112     
 
ಹದಿನಾರು ಅಕ್ಷರದ ಹವಣ ಬಲ್ಲವರಾರು ಅಜಲೋಕದಿಂ ಕೆಳಗೆ ತಾನೆ. ಅರಸೂಸದ ಮದದ ಹದಿನಾರು ಕಲೆಯ ಮತ್ತೆರಡೆಂಟು ಉಳಿಯಬಲ್ಲಡೆ ಆತ ಬ್ರಹ್ಮನಾದಾ ನಾದಬಿಂದುವಿನಲ್ಲಿ, ಸಾಧಿಸಿದ ಸುಧೆಯದು. ಅದ ಹರಿವಿಷ್ಣುಗಳಿಗಳವಲ್ಲದು ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದಿಸಿದ ಭಕ್ತಂಗೆ ಪಥ್ಯ ತಾನು.