ವಚನ - 1119     
 
ಹರಿಬ್ರಹ್ಮರು ಕಾವುದೊಂದು ಧರೆಯ ಹಿರಿಯ ಕೊಠಾರವಯ್ಯಾ. ಬಾರದವರೆಲ್ಲರ ಬಂಧನಕ್ಕೆ ತಂದು ಇಕ್ಕು ಬೀಯವನಿಕ್ಕುವರಯ್ಯಾ. ಈ ಬೆಬ್ಬನೆ ಬೆರೆವ ಹಿರಿಯರೆಲ್ಲರ ಒಳಗು ಮಾಡಿದೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.