ವಚನ - 1178     
 
ಅಮೃತವೆಂದರಿದಾತನೇನಮರನಾಗಲಿಲ್ಲ `ಬ್ರಹ್ಮಾಹಮಸ್ಮೀತಿ' ಎಂದಡಾತನೇನು ಮುಕ್ತನಾಗಲಿಲ್ಲ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಗುಣತ್ರಯವಳಿಯದನ್ನಕ್ಕ.