ವಚನ - 1272     
 
ಆದಿ ಆಧಾರವಿಲ್ಲದಂದಿನ ಸಾದಾಖ್ಯ ದೇಹವಿಲ್ಲದಂದಿನ ಅನಾದಿ ಸಂಸಿದ್ಧನ ಆಗುಮಾಡಿ ಹೆಸರಿಟ್ಟು, ಕರಸ್ಥಲಕ್ಕೆ ತಂದುಕೊಟ್ಟ ಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.