ವಚನ - 1577     
 
ಜ್ಞಾನವದು ದುರ್ಲಭವಲ್ಲ, ಅದರ ಭಾವ ದುರ್ಲಭವಯ್ಯಾ. ಭಾವವದು ದುರ್ಲಭವಲ್ಲ, ಅದರ ಏಕತ್ವವದು ದುರ್ಲಭ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.